-ಪ್ರಸನ್ನ ಕರ್ಪೂರ
ಹರಿಯಾಣ ಮತ್ತು ಜಮ್ಮು ಕಾಶ್ಮೀರ ಚುನಾವಣೆ ಲಿತಾಂಶ ಹೊರಬಿದ್ದ ಕೆಲ ದಿನಗಳಲ್ಲೇ ಪಕ್ಕದ ಮಹಾರಾಷ್ಟ್ರದ ವಿಧಾನಸಭೆಗೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಈ ಎರಡೂ ರಾಜ್ಯಗಳ ಚುನಾವಣೆ ಲಿತಾಂಶ ಆಧರಿಸಿ ನೋಡುವುದಾದರೆ ಅಚ್ಚರಿಯ ಲಿತಾಂಶ ನಿರೀಕ್ಷಿಸಬಹುದಾದರೂ ಮಹಾರಾಷ್ಟ್ರದ ಮತದಾರರ ಮನಸ್ಥಿತಿ ಮತ್ತು ರಾಜಕೀಯ ಸಮೀಕರಣ ಕೊಂಚ ಭಿನ್ನವಾಗಿಯೇ ಇದೆ. ಮೇಲ್ನೋಟಕ್ಕೆ ಆಡಳಿತ ವಿರೋಧಿ ಅಲೆ ಪ್ರಬಲ ಎಂದೆನಿಸಿದರೂ ಹೀಗೆ ಎಂದು ಹೇಳಲಾಗದು.
ಲೋಕಸಭೆ ಚುನಾವಣೆ ಚುನಾವಣೆಯಲ್ಲಿ ಮಹಾ ಅಘಾಡಿ(ಉದ್ಧವ ಠಾಕ್ರೆ, ಶರದ್ ಪವಾರ ಹಾಗೂ ಕಾಂಗ್ರೆಸ್) ಹೆಚ್ಚು ಸ್ಥಾನ ಪಡೆಯುವ ಮೂಲಕ ಚೇತರಿಕೆ ಕಂಡಿದ್ದು ಮಹಾಯುತಿಯ ಬಿಜೆಪಿ ಹಾಗೂ ಶಿವಸೇನೆ(ಏಕನಾಥ ಶಿಂಧೆಬಣ), ಎನ್ಸಿಪಿ (ಅಜಿತ ಪವಾರ ಬಣ)ಕೇವಲ 17ಸೀಟುಗಳನ್ನಷ್ಟೇ ಗೆಲ್ಲುವಲ್ಲಿ ಯಶಸ್ವಿಯಾಯಿತು. ಹಾಗೆ ನೋಡಿದರೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಸಾಕಷ್ಟು ವಿಚಾರಗಳು, ವಿಷಯಗಳಲ್ಲಿ ವ್ಯತ್ಯಾಸವಿದೆ. ಈ ಮಧ್ಯೆ ಬಿಜೆಪಿ ಮೇಲೆ ಎರಡು ಪ್ರಮುಖ ಪಕ್ಷಗಳನ್ನು ಒಡೆದು ಅಧಿಕಾರಕ್ಕೆ ಬಂದ ಆರೋಪವೂ ಇದೆ. ಈ ಮಧ್ಯೆ ಅಜಿತ ಪವಾರ ಬಣ ಸದ್ಯದಲ್ಲೇ ಶರದ ಪವಾರ್ ಬಣಕ್ಕೆ ಮರಳುವ ಸಾಧ್ಯತೆ ಕೂಡ ದಟ್ಟವಾಗಿದ್ದು ಹಾಗೇನಾದರೂ ಆದಲ್ಲಿ ಮಹಾಯುತಿ ಒಕ್ಕೂಟಕ್ಕೆ ಹಿನ್ನಡೆ ಖಚಿತ ಎಂದೇ ಹೇಳಲಾಗುತ್ತಿದೆ. ಅಜಿತ ಪವಾರ ಮತ್ತು ಶರದ ಪವಾರ ಬಣ ಒಂದಾದರೆ ಹಾಲಿ ಸಿಎಂ ಏಕನಾಥ ಶಿಂಧೆಗೆ ಇದು ಅಪಾಯದ ಗಂಟೆ ಇದ್ದಂತೆ.
ಕಳೆದ ವರ್ಷ ಕೊಲ್ಹಾಪುರದಲ್ಲಿ ನೆರೆ ಬಂದಾಗ ಡ್ನವೀಸರನ್ನು ಬಿಟ್ಟು ಅಮಿತ ಶಾ ನೇರವಾಗಿ ಪ್ರವಾಹಪೀಪಿಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಅಲ್ಲದೇ ಇವರಿಬ್ಬರ ಮಧ್ಯೆ ಸಂಬಂಧ ಅಷ್ಟಕ್ಕಷ್ಟೇ ಎಂದು ಹೇಳಲು ಇದೊಂದು ಉದಾಹರಣೆಯಷ್ಟೇಘಿ. ಇದರ ಜತೆ ಜತೆಗೆ ಮೂಲ ನಾಯಕರು ಮತ್ತು ಕಾರ್ಯಕರ್ತರನ್ನು ಕಡೆಗಣಿಸಿ ವಲಸಿಗರಿಗೆ ಮಣೆ ಹಾಕಿದ ಆರೋಪ ಡ್ನವೀಸರ ಮೇಲಿದೆ. ಇವರು ಪ್ರಧಾನಿ ಮೋದಿ ಅವರ ಜತೆ ಉತ್ತಮ ಬಾಂಧವ್ಯ ಹೊಂದಿರುವುದು ಇವರ ಪ್ಲಸ್ ಪಾಯಿಂಟ್. ಇನ್ನು ಹಾಲಿ ಸಿಎಂ ಏಕನಾಥ ಶಿಂಧೆ ಏನಿದ್ದರೂ ಠಾಣೆಗೆ ಸೀಮಿತ ಎಂಬುದು ಜಗಜ್ಜಾಹೀರ. ಒಕ್ಕೂಟವನ್ನು ಗೆಲುವಿನ ಹಳಿಗೆ ತಂದು ನಿಲ್ಲಿಸುವ ವರ್ಚಸ್ಸು ಇವರಿಗಿಲ್ಲಘಿ. ಚುನಾವಣೆ ಸಮೀಪಿಸುತ್ತಿದ್ದಂತೆ ಮುಂಬೈ ಪಾಲಿಕೆ ನೌಕರರಿಗೆ ಬೋನಸ್ ಘೋಷಣೆ, ಮುಂಬೈ ಪ್ರವೇಶೀಸುವ ಟೋಲ್ಗಳನ್ನು ಶುಲ್ಕ ಮುಕ್ತ ಮಾಡಿರುವುದು ಚುನಾವಣಾ ದೃಷ್ಟಿಕೋನದಿಂದ ಘೋಷಿಸಿದ ಒಂದು ಆಮಿಷವಷ್ಟೇ. ಇನ್ನು ಕೊನೆ ಗಳಿಗೆಯಲ್ಲಿ ವಿಧಾನಪರಿಷತ್ಗೆ 7 ಸದಸ್ಯರನ್ನು ನೇಮಿಸಿರುವುದು ಕೂಡ ಸ್ವಪಕ್ಷೀಯರ ಓಲೈಕೆ ತಂತ್ರದ ಒಂದು ಭಾಗವಾಗಿದೆ.
ಬದಲಾದ ಸನ್ನಿವೇಶದಲ್ಲಿ ಉದ್ಧವ ಠಾಕ್ರೆಯವರ ಬಲ ದಿನದಿಂದ ದಿನಕ್ಕೆ ವರ್ಧಿಸುತ್ತಿದೆ.ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಂ ಮತಗಳು ಗಣನೀಯವಾಗಿ ಇವರತ್ತ ವಾಲಿವೆ. ಆದರೆ ಹೃದಯ ಸಮಸ್ಯೆಯಿಂದ ಸ್ಟಂಟ್ ಹಾಕಿಸಿಕೊಂಡು ಅನಿವಾರ್ಯ ವಿಶ್ರಾಂತಿಗೆ ಮೊರೆ ಹೋಗಬೇಕಿರುವುದು ಉದ್ಧವ ಠಾಕ್ರೆ ಅವರಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಇವರ ಪ್ರಚಾರ ಅವಧಿ ಕಡಿಮೆಯಾದಷ್ಟು ಲಾಭ ಮಹಾಯುತಿ ಒಕ್ಕೂಟಕ್ಕೆ ಆಗಬಹುದು ಎನ್ನುವ ಲೆಕ್ಕಾಚಾರವೂ ಇದೆ.
ಸಂಪನ್ಮೂಲದ್ದೇ ಚಿಂತೆ
ಇನ್ನೊಂದೆಡೆ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಅಪರಾಧ ಕೃತ್ಯಗಳು ಎಗ್ಗಿಲ್ಲದೇ ನಡೆಯುತ್ತಿವೆ. ಅತ್ಯಲ್ಪ ಮೊತ್ತದ ಹಣಕ್ಕಾಗಿ ಕೊಲೆ ನಡೆಯುತ್ತಿವೆ ಎಂದರೆ ಯುವಪೀಳಿಗೆಯಲ್ಲಿ ದುಡ್ಡಿನ ಅವಶ್ಯಕತೆಯ ಪ್ರಮಾಣವನ್ನು ನಾವು ಊಹಿಸಬಹುದಾಗಿದೆ. ಕರ್ನಾಟಕ ಮಾದರಿಯಲ್ಲಿ ಮಹರಾಷ್ಟ್ರದಲ್ಲೂ ಪ್ರತಿ ಮನೆ ಯಜಮಾನಿಗೆ 1500 ರೂ ನೀಡುವ ಯೋಜನೆಯಿಂದ ಬೊಕ್ಕಸ ಬರಿದಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಹಣವೇ ಇಲ್ಲದಂತಾಗಿದೆ. ಬಹುತೇಕ ಸರಕಾರಿ ಜಮೀನುಗಳೆಲ್ಲ ಬಂಡವಾಳಶಾಹಿಗಳ ಕೈ ಸೇರಿದ ಆರೋಪವಿದೆ. ಬೊಕ್ಕಸಕ್ಕೆ ಆದಾಯದ ಮೂಲವೇ ಇಲ್ಲದಂತಾಗಿದ್ದು ಈಗ ಹೊಸದಾಗಿ ಆಯ್ಕೆಯಾಗಿ ಬರುವ ಯಾವುದೇ ಸರಕಾರಕ್ಕೂ ಇದು ದೊಡ್ಡ ಸವಾಲಾಗಲಿದೆ.
ಮರಾಠಾ ಮೀಸಲು ಹೋರಾಟ
ರಾಜ್ಯದಲ್ಲಿ ಮರಾಠರಿಗೆ ಮೀಸಲು ನೀಡಬೇಕೆನ್ನುವ ಪ್ರಮುಖ ಬೇಡಿಕೆಯೊಂದಿಗೆ ಹೋರಾಟ ನಡೆಸಿರುವ ಶಿವಬಾ ಸಂಘಟನೆಯ ಸಂಸ್ಥಾಪಕ ಮನೋಜ ಜೀರಂಗೆ ಪಾಟೀಲ ಎರಡೂ ಒಕ್ಕೂಟಗಳ ಅಭ್ಯರ್ಥಿಗಳ ಘೊಷಣೆ ನಂತರ ತಮ್ಮ ನಿಲುವು ಮತ್ತು ಒಲವು ಪ್ರಕಟಿಸುವುದಾಗಿ ತಿಳಿಸಿರುವುದು ವಿಶೇಷವಾಗಿದೆ. ಇದರ ಪ್ರತಿಧ್ವನಿ ಲೋಕಸಭೆ ಚುನಾವಣೆ ಲಿತಾಂಶದಲ್ಲೂ ಅನುರಣಿಸಿದೆ.ಇವರ ಜತೆಗೆ ಒಬಿಸಿ ಸಂಘರ್ಷ ಸೇನೆಯ ಸಂಸ್ಥಾಪಕ ಲಕ್ಷ್ಮಣ ಹಾಕೆ ಕೂಡ ತಮ್ಮ ಬೆಂಬಲ ಯಾರಿಗೆ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲಘಿ.ಈ ಮಧ್ಯೆ ಮೀಸಲು ಹೋರಾಟ ಹತ್ತಿಕ್ಕುವ ಯತ್ನ ನಡೆಸಿದ ಆರೋಪ ಉಪಮುಖ್ಯಮಂತ್ರಿ ದೇವೇಂದ್ರ ಡ್ನವೀಸ್ ಮೇಲಿದೆ.ಮರಾಠಾ ಸಮಾಜ ಮತ್ತು ಹಿಂದುಳಿದ ವರ್ಗಗಳ ಒಕ್ಕೂಟ ಇಷ್ಟರಲ್ಲೇ ಸಭೆ ಸೇರಿ ಚುನಾವಣೆ ವಿಚಾರದಲ್ಲಿ ಬೆಂಬಲ ಅಥವಾ ಸ್ಪರ್ಧೆ ಬಗ್ಗೆ ತೀರ್ಮಾನಿಸಲಿದ್ದು ಇದು ಕೂಡ ಮಹತ್ತರ ಬೆಳವಣಿಗೆಯಾಗಿದೆ.
ಮಹಾರಾಷ್ಟ್ರ ಬಹಳಷ್ಟು ವಿಷಯಗಳಲ್ಲಿ ನಿರ್ಣಾಯಕವಾಗಿದೆ. ಎಂದೂ ಮಲಗದ ನಗರ ಖ್ಯಾತಿಯ ಮುಂಬೈ ಇಡೀ ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು ಕೂಡ ಹೌದು. ಸಹಜವಾಗಿಯೇ ಇಲ್ಲಿ ಚುಕ್ಕಾಣಿ ಹಿಡಿಯಲು ಎಲ್ಲ ಪಕ್ಷಗಳು ಬಯಸುತ್ತವೆ. ಇದಕ್ಕಾಗಿ ಇನ್ನಿಲ್ಲಿದ ಕಸರತ್ತು ಕೂಡ ಮಾಡುತ್ತವೆ.