Friday, January 21, 2011
ಬೆಲೆ ಕುಸಿತಕ್ಕೆ ಬೆಚ್ಚಿಬಿದ್ದ ಬತ್ತ, ತೊಗರಿ ಬೆಳೆಗಾಗರರು
* ನಿರೀಕ್ಷೆಗೂ ಮೀರಿ ಬೆಳೆ ಬಿತ್ತಿ ಬೆಲೆ ಇಲ್ಲದೆ ಕಂಗಾಲಾದ ರಾಯಚೂರು, ಬಳ್ಳಾರಿ ರೈತರು
* ಊಪಯೋಗಕ್ಕೆ ಬಾರದ ಖರಿದಿ ಕೇಂದ್ರಗಳು
ಬೇಸಾಯವೇ ಬದುಕು ಅಂದುಕೊಂಡು ಸಾಲ ಸೂಲ ಮಾಡಿ ಬಿತ್ತಿದ ಬೆಳೆಗೆ ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದ ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯ ಬತ್ತ ಹಾಗು ತೊಗರಿ ಬೆಳೆಗಾರರೀಗ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ವರ್ಷದುದ್ದಕ್ಕೂ ಬೆವರು ಸುರಿಸಿ ಮಾಡಿದ ಕೃ ನಿರೀಕ್ಷಿ ಫಲ ನೀಡದೇ ಹೋದ ಕಾರಣ ಆಕಾಶವೇ ಮೈ ಮೇಲೆ ಕಳಚಿ ಬಿದ್ದ ಪರಿಸ್ಥಿತಿ ಇವರದ್ದಾಗಿದೆ. ಬದಲಾಗಿ ಯೋಚಿಸಿ ಬಿತ್ತನೆ ಮಾಡಿದ್ದಾದಲ್ಲಿ ಬೆಳೆ ಹಾನಿ ಆತಂಕ ಹಾಗೂ ಬೆಲೆ ಕುಸಿತದ ಭೀತಿಂದ ತಪ್ಪಿಸಿಕೊಳ್ಳಬಹುದಿತ್ತೇನೋ. ಆದರೂ ಸರ್ಕಾರ ಇವರ ನೆರವಿಗೆ ಧಾವಿಸಬೇಕಿದೆ. ಖರೀದಿ ಕೆಂದ್ರಗಳಲ್ಲಿ ಉತ್ತಮ ಬೆಂಬಲ ಬೆಲೆ ನಿಗದಿಪಡಿಸುವ ಮೂಲಕ ಅನ್ನದಾತನ ಆಸರೆಗೆ ಮುಂದಾಗಬೇಕಿದೆ.
ಬಹುಶ: ನಮ್ಮ ನಾಡಿನ ರೈತರ ಹಣೆಬರಹವೇ ಸರಿ ಇದ್ದ ಹಾಗಿಲ್ಲ. ಒಮ್ಮೆ ಅತೀವ್ಟಷ್ಟಿ ಇನ್ನೊಮ್ಮೆ ಅನಾವ್ಟಷ್ಟಿ . ಪರಿಣಾಮ ಬಿತ್ತಿದ ಬೆಳೆ ನಾಶ. ಮೈ ತುಂಬಾ ಸಾಲ. ಇಲ್ಲವೇ ನೆರೆ ಗೋವಾಕ್ಕೋ ಅಥವಾ ಮಹಾರಾಷ್ಟ್ರಕ್ಕೊ ಗಾರೆ ಕೆಲಸಕ್ಕೆ ಗುಳೆ ಹೋಗೋದು. ಹೌದು ಉತ್ತರ ಕರ್ನಾಟಕದ ರೈತರು ಪ್ರಕೃತಿ ವಿಕೋಪ ಹಾಗೂ ಬೆಲೆ ಕುಸಿತದಿಂದ ತತ್ತರಿಸಿದ್ದಾರೆ. ಅದರಲ್ಲೂ ಬತ್ತ ಬೆಳೆದ ಬಳ್ಳಾರಿ ಹಾಗೂ ತೊಗರಿ ಬೆಳೆದ ರಾಯಚೂರು ಜಿಲ್ಲೆಯ ರೈತರ ಗೋಳಂತೂ ಹೇಳತೀರದು. ಬೆಲೆ ಕುಸಿತ ಭೀತಿಂದ ಮುಂದೇನು ಎಂಬ ಚಿಂತೆ ಇವರನ್ನು ಆವರಿಸಿದೆ.
ತೇವಾಂಶ ತಂದ ತೊಂದರೆ: ಗಡಿಜಿಲ್ಲೆ ಬಳ್ಳಾರಿ ಬಹುತೇಕ ರೈತರು ಜಿಲ್ಲೆಯಲ್ಲಿ ತುಂಗಭದ್ರಾ ನದಿ ಹರಿದ ಪರಿಣಾಮ ಬತ್ತ ಬೆಳೆಯುತ್ತಾರೆ. ಮುಂಗಾರಿನಲ್ಲಿ ನಿರೀಕ್ಷೆಗೂ ಮೀರಿ ಬತ್ತ ಬಿತ್ತಿರುವ ರೈತರೀಗ ಬೆಳೆದ ಧಾನ್ಯಕ್ಕೆ ಉತ್ತಮ ಬೆಲೆ ಇಲ್ಲದ ಕಾರಣ ನಿರಾಶರಾಗಿದ್ದಾರೆ. ಈಲ್ಲೆಯ ಅಂದಾಜು ೭೨ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಬಿತ್ತಲಾಗಿತ್ತು. ಈಲ್ಲೆಯ ಸಿರಗುಪ್ಪ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂ"ನಹಡಗಲಿ, ಸಂಡೂರು, ಕೂಡ್ಲಿಗಿಯಲ್ಲಿ ಇದರಲ್ಲಿ ಈಗಾಗಲೇ ಅರ್ಧಕ್ಕಿಂತು ಹೆಚ್ಚು ಬೆಳೆ ಕಟಾವು ಮಾಡಲಾಗಿದೆ. ಗೋದಾಮುಗಳಲ್ಲಿ ಸಂಗ್ರಹ ಮಾಡಿದ್ದು ಬಿಟ್ಟರೆ ಮುಂದೆ ಯಾವ ಕೆಲಸವೂ ಆಗಿಲ್ಲ. ಕೆಲವೆಡೆ ಬತ್ತ ಸಂಗ್ರಹಿಸಲು ಗೋದಾಮುಗಳಿಲ್ಲದಿರುವುದು ಮತ್ತೊಂದು ಸಮಸ್ಯೆಗೆ ಎಡೆ ಮಾಡಿಕೊಟ್ಟಿದೆ. ಎಲ್ಲಿದಕ್ಕಿಂತ ಹೆಚ್ಚಾಗಿ ತೇವಾಂಶ ಹೆಚ್ಚಾಗಿರುವುದು ರೈತರ ಆತಂಕ ಹೆಚ್ಚಿಸಿದೆ. ಸರ್ಕಾರದಿಂದ ಸ್ಥಾಪನೆಯಾದ ಬತ್ತ ಖರೀದಿ ಕೆಂದ್ರಗಳಲ್ಲಿ ಇಂತಹ ಬತ್ತವನ್ನು ನೋಡುವವರೂ ಇಲ್ಲದಂತಾಗಿದೆ. ವ್ಯಾಪಾರಸ್ಥರು ತೇವಾಂಶ ಹೆಚ್ಚಿರುವ ಈ ಬತ್ತ ಖರೀದಿಸಲು ಹಿಂದೇಟು ಹಾಕುತ್ತಿರುವುದರಿಂದ ಬತ್ತ ಮಾರಾಟವಾಗದೇ ಹಾಗೆ ಉಳಿಯುವ ಆತಂಕ ರೈತರದ್ದಾಗಿದೆ.
ಅತ್ತ ಸರ್ಕಾರ ಬತ್ತಕ್ಕೆ ಬೆಂಬಕ ಬೆಲೆ ಏನೋ ಘೋಷಿಸಿ ಕೈ ತೊಳೆದುಕೊಂಡಿದೆ. ಆದರೆ ಇದೇ ಸರ್ಕಾರದ ವತಿಂದ ತೆರೆಯಲಾದ ಬತ್ತ ಖರೀದಿ ಕೆಂದ್ರಗಳಲ್ಲಿ ತೇವಾಂಶ ಕಡಿಮೆ ಕಾರಣವೊಡ್ಡಿ ಹಾಗೂ ಈ ಕೇಂದ್ರಗಳು ಹಟ್ಟಣ ಹಾಗೂ ತಾಲೂಕು ಕೆಂದ್ರಗಳಿಗೆ ಮಾತ್ರ ಸೀಮಿತವಾಗಿರುವುದು ಬೆಳೆಗಾರರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಾಗಿವೆ. ದೂರದ ಖರೀದಿ ಕೆಂದ್ರಕ್ಕೆ ಬೆಳೆ ತೆಗೆದುಕೊಂಡು ಹೋದರೂ ಅಲ್ಲಿ ಮಾರಾಟವಾಗದಿದ್ದಲ್ಲಿ ಬಂದು ಹೋದ ಖರ್ಚು ಸಹ ಮೈ ಮೇಲೆ. ಮೊದಲೇ ಹಣಕಾಸಿನ ಬಿಕ್ಕಟ್ಟು ಇಂತಹದರಲ್ಲಿ ಈ ಸಮಸ್ಯೆ ಎದುರಾದರೆ ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ಅದೇ ರೀತಿ ದಾವಣಗೆರೆ ಜಿಲ್ಲೆಯ ರೈತರೂಸಹ ಕಳೆದ ತಿಂಗಳು ಬೆಂಬಲ ಬೆಲೆಗೆ ಆಗ್ರಹಿಸಿ ಉಗ್ರ ಹೋರಾಟ ನಡೆಸಿದ್ದರು. ದಾವಣಗೆರೆ ಬಂದ್ ಸಹ ಆಚರಿಸಲಾಗಿತ್ತು. ಕಳೆದ ಬಾರಿಯ ಬೆಂಬಲ ಬೆಲೆ ೧೫೦೦ ರು.ಅನ್ನು ಈ ಬಾರಿಯೂ ನೀಡಬೇಕೆಂಬುದು ರೈತರ ಆಗ್ರಹವಾಗಿದೆ. ಸರ್ಕಾರದ ಬೆಂಬಲ ಬೆಲೆಂದ ಉತ್ತೇಜಿತರಾದ ರೈತರು ಸಿಕ್ಕಾಪಟ್ಟೆ ಬಿತ್ತನೆ ಮಾಡಿ ಇದೀಗ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ.
ತೊಗರಿ ತಾಪತ್ರಯ: ಇನ್ನು ರಾಯಚೂರು ಜಿಲ್ಲೆಯ ರೈತರ ಗೋಳೇನು ಭಿನ್ನವಾಗಿಲ್ಲ. ಈ ಜಿಲ್ಲೆಯಲ್ಲೂ ಬತ್ತ ಪ್ರಮುಖ ಬೆಳೆಯಾಗಿದ್ದು, ಇದರ ಜೊತೆಗೆ ಬೆಳೆಯುವ ಇನ್ನೊಂದು ಬೆಳೆ ತೊಗರಿಗೂ ಬೆಲೆ ಕುಸಿತದ ಭೀತಿ ಎದುರಾಗಿದೆ. ಇಲ್ಲೂ ಅದೇ ಪರಿಸ್ಥಿತಿ ಕಳೆದ ವರ್ಷದ ತೊಗರಿ ಬೆಲೆ ನೋಡಿದ ರೈತರು ಹಿಂದೆ ಮುಂದೆ ಯೋಚಿಸದೆ ಹಿಗ್ಗಾ ಮುಗ್ಗಾ ತೊಗರಿ ಬೆಳೆದಿದ್ದಾರೆ. ವಾಡಿಕೆಗಿಂತ ಹೆಚ್ಚಿಗೆ ತೊಗರಿ ಬೆಳೆಯಲಾಗಿದ್ದು ಈಗ ಬೆಲೆ ಕುಸಿದಿರುವುದು ರೈತರ ಸಮಸ್ಯೆ ಇಮ್ಮಡಿಸಿದೆ. ಏನಿಲ್ಲೆ ಅಂದರೂ ಜಿಲ್ಲೆಯ ಸುಮಾರು ೧ ಲಕ್ಷಕ್ಕಿಂತ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದೆ. ಇದಕ್ಕೆ ಪೂರಕವಾಗಿ ಮಳೆರಾಯನೂ ಉತ್ತಮ ಕೃಪೆ ತೋರಿದ ಕಾರಣ ಫಸಲು ಚೆನ್ನಾಗಿಯೇ ಬಂದಿದೆ. ಎಕರೆಗೆ ೬ ರಿಂದ ೭ ಕ್ವಿಂಟಾಲ್ ನಿರೀಕ್ಷೆ ರೈತರದ್ದಾಗಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ಪ್ರಸ್ತುತ ೨ ರಿಂದ ೩೫೦೦ ವರೆಗೆ ಬೆಲೆ ಇದೆ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಮುಂದಿನ ದಿನಗಳಲ್ಲೂ ಬೆಲೆ ಏರುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ ಬದಲಾಗಿ ದರ ಇಳಿಯುವ ಸಾಧ್ಯತೆಗಳೇ ಹೆಚ್ಚು.
ಇನ್ನು ರೈತರ ನೆರವಿಗೆಂದು ಕೇಂದ್ರ ಸರ್ಕಾರ ೩೦೦೦ ರು. ದರ ನಿಗದಿಗೊಳಿಸಿದೆ. ಆದರೆ ಈ ದರದನ್ವಯ ಖರಿದಿಸುವವರೇ ಇಲ್ಲದಂತಾಗಿದೆ. ಸರ್ಕಾರ ನಿಗದಿಪಡಿಸಿದ ದರಕ್ಕಿಂತಲೂ ಕಡಿಮೆ ದರದಲ್ಲಿ ವ್ಯಾಪಾರಸ್ಥರು ತೊಗರಿ ಖರಿದಿಸುತ್ತಿರುವುದರಿಂದ ರೈತ ನಷ್ಟ ಅನುಭವಿಸುವಂತಾಗಿದೆ. ಇದೆಲ್ಲದರ ಪರಿಣಾಮ ಮತ್ತೆ ಹೋರಾಟಕ್ಕಿಳಿಯುವ ಯೋಚನೆ ಯೊಂದೇ ರೈತರದ್ದಾಗಿದೆ. ಅಲ್ಲದೇ ಅನಿವಾರ್ಯತೆಯೂ ಹೌದು. ನಿರೀಕ್ಷೆಗೂ ಮೀರಿ ತೊಗರಿ ಬೆಳೆದು ಬತ್ತದ ಬೆಳೆಗಾರರ ತರಹವೇ ಬೆಲೆ ಕುಸಿತ ಭಿತಿ ಎದುರಿಸುತ್ತಿರುವ ರೈತರ ಗೋಳು ಶೋsಚನೀಯವಾಗಿದೆ.
Subscribe to:
Post Comments (Atom)
No comments:
Post a Comment