
Monday, January 31, 2011
Saturday, January 29, 2011
Friday, January 28, 2011
Friday, January 21, 2011
ಬೆಲೆ ಕುಸಿತಕ್ಕೆ ಬೆಚ್ಚಿಬಿದ್ದ ಬತ್ತ, ತೊಗರಿ ಬೆಳೆಗಾಗರರು
* ನಿರೀಕ್ಷೆಗೂ ಮೀರಿ ಬೆಳೆ ಬಿತ್ತಿ ಬೆಲೆ ಇಲ್ಲದೆ ಕಂಗಾಲಾದ ರಾಯಚೂರು, ಬಳ್ಳಾರಿ ರೈತರು
* ಊಪಯೋಗಕ್ಕೆ ಬಾರದ ಖರಿದಿ ಕೇಂದ್ರಗಳು
ಬೇಸಾಯವೇ ಬದುಕು ಅಂದುಕೊಂಡು ಸಾಲ ಸೂಲ ಮಾಡಿ ಬಿತ್ತಿದ ಬೆಳೆಗೆ ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದ ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯ ಬತ್ತ ಹಾಗು ತೊಗರಿ ಬೆಳೆಗಾರರೀಗ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ವರ್ಷದುದ್ದಕ್ಕೂ ಬೆವರು ಸುರಿಸಿ ಮಾಡಿದ ಕೃ ನಿರೀಕ್ಷಿ ಫಲ ನೀಡದೇ ಹೋದ ಕಾರಣ ಆಕಾಶವೇ ಮೈ ಮೇಲೆ ಕಳಚಿ ಬಿದ್ದ ಪರಿಸ್ಥಿತಿ ಇವರದ್ದಾಗಿದೆ. ಬದಲಾಗಿ ಯೋಚಿಸಿ ಬಿತ್ತನೆ ಮಾಡಿದ್ದಾದಲ್ಲಿ ಬೆಳೆ ಹಾನಿ ಆತಂಕ ಹಾಗೂ ಬೆಲೆ ಕುಸಿತದ ಭೀತಿಂದ ತಪ್ಪಿಸಿಕೊಳ್ಳಬಹುದಿತ್ತೇನೋ. ಆದರೂ ಸರ್ಕಾರ ಇವರ ನೆರವಿಗೆ ಧಾವಿಸಬೇಕಿದೆ. ಖರೀದಿ ಕೆಂದ್ರಗಳಲ್ಲಿ ಉತ್ತಮ ಬೆಂಬಲ ಬೆಲೆ ನಿಗದಿಪಡಿಸುವ ಮೂಲಕ ಅನ್ನದಾತನ ಆಸರೆಗೆ ಮುಂದಾಗಬೇಕಿದೆ.
ಬಹುಶ: ನಮ್ಮ ನಾಡಿನ ರೈತರ ಹಣೆಬರಹವೇ ಸರಿ ಇದ್ದ ಹಾಗಿಲ್ಲ. ಒಮ್ಮೆ ಅತೀವ್ಟಷ್ಟಿ ಇನ್ನೊಮ್ಮೆ ಅನಾವ್ಟಷ್ಟಿ . ಪರಿಣಾಮ ಬಿತ್ತಿದ ಬೆಳೆ ನಾಶ. ಮೈ ತುಂಬಾ ಸಾಲ. ಇಲ್ಲವೇ ನೆರೆ ಗೋವಾಕ್ಕೋ ಅಥವಾ ಮಹಾರಾಷ್ಟ್ರಕ್ಕೊ ಗಾರೆ ಕೆಲಸಕ್ಕೆ ಗುಳೆ ಹೋಗೋದು. ಹೌದು ಉತ್ತರ ಕರ್ನಾಟಕದ ರೈತರು ಪ್ರಕೃತಿ ವಿಕೋಪ ಹಾಗೂ ಬೆಲೆ ಕುಸಿತದಿಂದ ತತ್ತರಿಸಿದ್ದಾರೆ. ಅದರಲ್ಲೂ ಬತ್ತ ಬೆಳೆದ ಬಳ್ಳಾರಿ ಹಾಗೂ ತೊಗರಿ ಬೆಳೆದ ರಾಯಚೂರು ಜಿಲ್ಲೆಯ ರೈತರ ಗೋಳಂತೂ ಹೇಳತೀರದು. ಬೆಲೆ ಕುಸಿತ ಭೀತಿಂದ ಮುಂದೇನು ಎಂಬ ಚಿಂತೆ ಇವರನ್ನು ಆವರಿಸಿದೆ.
ತೇವಾಂಶ ತಂದ ತೊಂದರೆ: ಗಡಿಜಿಲ್ಲೆ ಬಳ್ಳಾರಿ ಬಹುತೇಕ ರೈತರು ಜಿಲ್ಲೆಯಲ್ಲಿ ತುಂಗಭದ್ರಾ ನದಿ ಹರಿದ ಪರಿಣಾಮ ಬತ್ತ ಬೆಳೆಯುತ್ತಾರೆ. ಮುಂಗಾರಿನಲ್ಲಿ ನಿರೀಕ್ಷೆಗೂ ಮೀರಿ ಬತ್ತ ಬಿತ್ತಿರುವ ರೈತರೀಗ ಬೆಳೆದ ಧಾನ್ಯಕ್ಕೆ ಉತ್ತಮ ಬೆಲೆ ಇಲ್ಲದ ಕಾರಣ ನಿರಾಶರಾಗಿದ್ದಾರೆ. ಈಲ್ಲೆಯ ಅಂದಾಜು ೭೨ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಬಿತ್ತಲಾಗಿತ್ತು. ಈಲ್ಲೆಯ ಸಿರಗುಪ್ಪ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂ"ನಹಡಗಲಿ, ಸಂಡೂರು, ಕೂಡ್ಲಿಗಿಯಲ್ಲಿ ಇದರಲ್ಲಿ ಈಗಾಗಲೇ ಅರ್ಧಕ್ಕಿಂತು ಹೆಚ್ಚು ಬೆಳೆ ಕಟಾವು ಮಾಡಲಾಗಿದೆ. ಗೋದಾಮುಗಳಲ್ಲಿ ಸಂಗ್ರಹ ಮಾಡಿದ್ದು ಬಿಟ್ಟರೆ ಮುಂದೆ ಯಾವ ಕೆಲಸವೂ ಆಗಿಲ್ಲ. ಕೆಲವೆಡೆ ಬತ್ತ ಸಂಗ್ರಹಿಸಲು ಗೋದಾಮುಗಳಿಲ್ಲದಿರುವುದು ಮತ್ತೊಂದು ಸಮಸ್ಯೆಗೆ ಎಡೆ ಮಾಡಿಕೊಟ್ಟಿದೆ. ಎಲ್ಲಿದಕ್ಕಿಂತ ಹೆಚ್ಚಾಗಿ ತೇವಾಂಶ ಹೆಚ್ಚಾಗಿರುವುದು ರೈತರ ಆತಂಕ ಹೆಚ್ಚಿಸಿದೆ. ಸರ್ಕಾರದಿಂದ ಸ್ಥಾಪನೆಯಾದ ಬತ್ತ ಖರೀದಿ ಕೆಂದ್ರಗಳಲ್ಲಿ ಇಂತಹ ಬತ್ತವನ್ನು ನೋಡುವವರೂ ಇಲ್ಲದಂತಾಗಿದೆ. ವ್ಯಾಪಾರಸ್ಥರು ತೇವಾಂಶ ಹೆಚ್ಚಿರುವ ಈ ಬತ್ತ ಖರೀದಿಸಲು ಹಿಂದೇಟು ಹಾಕುತ್ತಿರುವುದರಿಂದ ಬತ್ತ ಮಾರಾಟವಾಗದೇ ಹಾಗೆ ಉಳಿಯುವ ಆತಂಕ ರೈತರದ್ದಾಗಿದೆ.
ಅತ್ತ ಸರ್ಕಾರ ಬತ್ತಕ್ಕೆ ಬೆಂಬಕ ಬೆಲೆ ಏನೋ ಘೋಷಿಸಿ ಕೈ ತೊಳೆದುಕೊಂಡಿದೆ. ಆದರೆ ಇದೇ ಸರ್ಕಾರದ ವತಿಂದ ತೆರೆಯಲಾದ ಬತ್ತ ಖರೀದಿ ಕೆಂದ್ರಗಳಲ್ಲಿ ತೇವಾಂಶ ಕಡಿಮೆ ಕಾರಣವೊಡ್ಡಿ ಹಾಗೂ ಈ ಕೇಂದ್ರಗಳು ಹಟ್ಟಣ ಹಾಗೂ ತಾಲೂಕು ಕೆಂದ್ರಗಳಿಗೆ ಮಾತ್ರ ಸೀಮಿತವಾಗಿರುವುದು ಬೆಳೆಗಾರರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಾಗಿವೆ. ದೂರದ ಖರೀದಿ ಕೆಂದ್ರಕ್ಕೆ ಬೆಳೆ ತೆಗೆದುಕೊಂಡು ಹೋದರೂ ಅಲ್ಲಿ ಮಾರಾಟವಾಗದಿದ್ದಲ್ಲಿ ಬಂದು ಹೋದ ಖರ್ಚು ಸಹ ಮೈ ಮೇಲೆ. ಮೊದಲೇ ಹಣಕಾಸಿನ ಬಿಕ್ಕಟ್ಟು ಇಂತಹದರಲ್ಲಿ ಈ ಸಮಸ್ಯೆ ಎದುರಾದರೆ ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ಅದೇ ರೀತಿ ದಾವಣಗೆರೆ ಜಿಲ್ಲೆಯ ರೈತರೂಸಹ ಕಳೆದ ತಿಂಗಳು ಬೆಂಬಲ ಬೆಲೆಗೆ ಆಗ್ರಹಿಸಿ ಉಗ್ರ ಹೋರಾಟ ನಡೆಸಿದ್ದರು. ದಾವಣಗೆರೆ ಬಂದ್ ಸಹ ಆಚರಿಸಲಾಗಿತ್ತು. ಕಳೆದ ಬಾರಿಯ ಬೆಂಬಲ ಬೆಲೆ ೧೫೦೦ ರು.ಅನ್ನು ಈ ಬಾರಿಯೂ ನೀಡಬೇಕೆಂಬುದು ರೈತರ ಆಗ್ರಹವಾಗಿದೆ. ಸರ್ಕಾರದ ಬೆಂಬಲ ಬೆಲೆಂದ ಉತ್ತೇಜಿತರಾದ ರೈತರು ಸಿಕ್ಕಾಪಟ್ಟೆ ಬಿತ್ತನೆ ಮಾಡಿ ಇದೀಗ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ.
ತೊಗರಿ ತಾಪತ್ರಯ: ಇನ್ನು ರಾಯಚೂರು ಜಿಲ್ಲೆಯ ರೈತರ ಗೋಳೇನು ಭಿನ್ನವಾಗಿಲ್ಲ. ಈ ಜಿಲ್ಲೆಯಲ್ಲೂ ಬತ್ತ ಪ್ರಮುಖ ಬೆಳೆಯಾಗಿದ್ದು, ಇದರ ಜೊತೆಗೆ ಬೆಳೆಯುವ ಇನ್ನೊಂದು ಬೆಳೆ ತೊಗರಿಗೂ ಬೆಲೆ ಕುಸಿತದ ಭೀತಿ ಎದುರಾಗಿದೆ. ಇಲ್ಲೂ ಅದೇ ಪರಿಸ್ಥಿತಿ ಕಳೆದ ವರ್ಷದ ತೊಗರಿ ಬೆಲೆ ನೋಡಿದ ರೈತರು ಹಿಂದೆ ಮುಂದೆ ಯೋಚಿಸದೆ ಹಿಗ್ಗಾ ಮುಗ್ಗಾ ತೊಗರಿ ಬೆಳೆದಿದ್ದಾರೆ. ವಾಡಿಕೆಗಿಂತ ಹೆಚ್ಚಿಗೆ ತೊಗರಿ ಬೆಳೆಯಲಾಗಿದ್ದು ಈಗ ಬೆಲೆ ಕುಸಿದಿರುವುದು ರೈತರ ಸಮಸ್ಯೆ ಇಮ್ಮಡಿಸಿದೆ. ಏನಿಲ್ಲೆ ಅಂದರೂ ಜಿಲ್ಲೆಯ ಸುಮಾರು ೧ ಲಕ್ಷಕ್ಕಿಂತ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದೆ. ಇದಕ್ಕೆ ಪೂರಕವಾಗಿ ಮಳೆರಾಯನೂ ಉತ್ತಮ ಕೃಪೆ ತೋರಿದ ಕಾರಣ ಫಸಲು ಚೆನ್ನಾಗಿಯೇ ಬಂದಿದೆ. ಎಕರೆಗೆ ೬ ರಿಂದ ೭ ಕ್ವಿಂಟಾಲ್ ನಿರೀಕ್ಷೆ ರೈತರದ್ದಾಗಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿದೆ. ಪ್ರಸ್ತುತ ೨ ರಿಂದ ೩೫೦೦ ವರೆಗೆ ಬೆಲೆ ಇದೆ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಮುಂದಿನ ದಿನಗಳಲ್ಲೂ ಬೆಲೆ ಏರುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ ಬದಲಾಗಿ ದರ ಇಳಿಯುವ ಸಾಧ್ಯತೆಗಳೇ ಹೆಚ್ಚು.
ಇನ್ನು ರೈತರ ನೆರವಿಗೆಂದು ಕೇಂದ್ರ ಸರ್ಕಾರ ೩೦೦೦ ರು. ದರ ನಿಗದಿಗೊಳಿಸಿದೆ. ಆದರೆ ಈ ದರದನ್ವಯ ಖರಿದಿಸುವವರೇ ಇಲ್ಲದಂತಾಗಿದೆ. ಸರ್ಕಾರ ನಿಗದಿಪಡಿಸಿದ ದರಕ್ಕಿಂತಲೂ ಕಡಿಮೆ ದರದಲ್ಲಿ ವ್ಯಾಪಾರಸ್ಥರು ತೊಗರಿ ಖರಿದಿಸುತ್ತಿರುವುದರಿಂದ ರೈತ ನಷ್ಟ ಅನುಭವಿಸುವಂತಾಗಿದೆ. ಇದೆಲ್ಲದರ ಪರಿಣಾಮ ಮತ್ತೆ ಹೋರಾಟಕ್ಕಿಳಿಯುವ ಯೋಚನೆ ಯೊಂದೇ ರೈತರದ್ದಾಗಿದೆ. ಅಲ್ಲದೇ ಅನಿವಾರ್ಯತೆಯೂ ಹೌದು. ನಿರೀಕ್ಷೆಗೂ ಮೀರಿ ತೊಗರಿ ಬೆಳೆದು ಬತ್ತದ ಬೆಳೆಗಾರರ ತರಹವೇ ಬೆಲೆ ಕುಸಿತ ಭಿತಿ ಎದುರಿಸುತ್ತಿರುವ ರೈತರ ಗೋಳು ಶೋsಚನೀಯವಾಗಿದೆ.
ಅರಭಾವಿ:ಬಿದ್ದೀತೆ ಬಾಲಚಂದ್ರಗೆ ಬ್ರೇಕ್
* ಸಚಿವ ಉಮೇಶ್ಕತ್ತಿ, ಲಕ್ಷ್ಮಣ ಸವದಿ ಆದಿಯಾಗಿ ಕ್ಷೇತ್ರದಲ್ಲೇ ಬೀಡು
ಗೋಕಾಕ್ ಎಂದಾಕ್ಷಣ ಒಂದು ಥಟ್ಟನೆ ಹೊಳೆಯೋದು ಫಾಲ್ಸ್ ಮತ್ತೊಂದು ಜಾರಕಿಹೊಳಿ ಕುಟುಂಬ. ಹೌದು ಇವೆರಡೂ ಗೋಕಾಕ್ನ್ನು ಪ್ರತನಿಧಿಸುವ ಎರಡು ಅಂಶಗಳು.ಒಂದು ತನ್ನ ಸಹಜ ಸೊಗಡಿನಿಂದ ಜನರ ಸ್ಮತಿಪಟಲದಲ್ಲಿ ಛಾಪು ಮೂಡಿಸಿದ್ದರೆ ಇನ್ನೊಂದು ಜಾರಕಿಹೊಳಿ ಕುಟುಂಬ ರಾಜಕೀಯವಾಗಿ ಗುರ್ತಿಸಿಕೊಂಡಿದ್ದಾರೆ. ಗೋಕಾಕ್ ತಾಲೂಕನ್ನು ತಮ್ಮ ಕುಟುಂಬದ ಕಪಿಮ್ಠುಯಲ್ಲಿ ಇಟ್ಟುಕೊಂಡಿರುವ ಜಾರಕಿಹೊಳಿ ತಾಲೂಕಿನ ರಾಜಕೀಯವಷ್ಟೇ ಏಕೆ ರಾಜ್ಯ ರಾಜಕಾರಣದಲ್ಲೂ ಅಷ್ಟೇ. ಇಂತಹ ರಾಜಕೀಯ ಜಿದ್ದಾಜಿದ್ದಿಯ ತಾಲೂಕಿನಲ್ಲೀಗ ಜಿಲ್ಲಾ ಹಾಗೂ ಪಂಚಾತಿ ಚುನಾವಣೆ ಕಾವು ರಂಗೇರಿದೆ. ಒಂದು ಕಾಲದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಬೆಂಬಲಿಸಿ ಸಚಿವ ಸ್ಥಾನ ಪಡೆದು ಈಗ ಸಿಎಂ ವಿರುದ್ಧ ಸೆಡ್ಡು ಹೊಡೆದ ಬಾಲಚಂದ್ರ ಜಾರಕಿಹೊಳಿ ಸ್ಥಳಿಯರಾಗಿರುವುದರಿಂದ ಪರಿಣಾಮ ಈ ಚುನಾವಣೆ ಭಾರೀ ಕುತೂಹಲ ಪಡೆದಿದೆ.
ಜಿದ್ದಾಜಿದ್ದಿನ ರಾಜಕೀಯ: ಮೊದಲಿನಿಂದಲೂ ತಾಲೂಕಿನ ರಾಜಕೀಯ ಚಿತ್ರಣ ಅವಲೋಕಿಸಿದರೆ ಜಾರಕಿಹೊಳಿ ಕುಟುಂಬದ ಹಿಡಿತದ ಪ್ರಮಾಣ ಗೊತ್ತಾಗುತ್ತದೆ. ಸ್ಥಳಿಯ ಸಂಸ್ಥೆಗಳಿಂದ ಹಿಡಿದು ಗ್ರಾಮ ಪಂಚಾತಿಯಲ್ಲೂ ಈ ನಾಲ್ವರು ಜಾರಕಿಹೊಳಿ ಬೆಂಬಲಿಗರೇ ಅನ್ನೋದು ವಿಶೇಷ.ನಾಲ್ವರೂ ತಮ್ಮದೇ ಆದ ಬೆಂಬಲಿಗರ ಪಡೆ ಹೊಂದಿದ್ದು ಹಲವೆಡೆ ಪರಸ್ಪರ ವಿರುದ್ಧವಾಗಿ ಸೆಣಸಿದ್ದೂ ಉಂಟು. ಸತೀಶ್ ಜಾರಕಿಹೊಳಿ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ನಲ್ಲಿದ್ದಾರೆ. ಇನ್ನು ಬಾಲಚಂದ್ರ ಜಾರಕಿಹೊಳಿ ಈ ಹಿಂದೆ ಜೆಡಿಎಸ್ ಮಧ್ಯೆ ಬಿಜೆಪಿ ಸೇರಿ ಸಿಎಂ ವಿರುದ್ದ ಸಿಡಿದೆದ್ದು ಶಾಸಕತ್ವದಿಂದ ಅನರ್ಹಗೊಂಡು ಪರೋಕ್ಷವಾಗಿ ಜೆಡಿಎಸ್ ಬೆಂಬಲಿಸುತ್ತಿದ್ದಾರೆ.ಇವರ ಪಕ್ಕಾ ಬೆಂಬಲಿಗರಾದ ಡಾ. ರಾಜೆಂದ್ರ ಸಣ್ಣಕ್ಕಿ ಮತ್ತಿತರರು ಈ ಬಾರಿ ಜೆಡಿಎಸ್ನಿಂದ ಮತ್ತೆ ಸ್ಪರ್ಧಿಸಿದ್ದು ಬಾಲಚಂದ್ರ ಇವರನ್ನು ಬೆಂಬಲಿಸುತ್ತಿದ್ದಾರೆ. ಅರಭಾವಿ ಕ್ಷೇತ್ರದಲ್ಲಿ ಸಾಕಷ್ಟು ವಚಸ್ಸು ಹೊಂದಿರುವ ಬಾಲಚಂದ್ರ ಹಾಗೂ ಇವರ ಬೆಂಬಲಿಗರನ್ನು ಸೋಲಿಸುವುದು ಕಷ್ಟದ ಮಾತೇ ಆದರೂ ಅಸಾಧ್ಯವೇನಲ್ಲ.ಇದಕ್ಕೆ ಪೂರಕವೆನ್ನುವಂತೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಸಂಸದ ಸುರೇಶ್ ಅಂಗಡಿ ಅರಭಾವಿ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದು ಬಾಲಚಂದ್ರರನ್ನು ಸ್ವಲ್ಪ ದೃತಿಗೆಡಿಸಿದೆ. ಇನ್ನು ಕಳೆದ ಬಾರಿ ಗೋಕಾಕ್ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿಂದ ಸ್ಪರ್ಧಿಸಿ ಸೋತಿದ್ದ ಡಾ. ಭೀಮಶಿ ಜಾರಕಿಹೊಳಿ ಸಹ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.ಇನ್ನು ಜೆಡಿಎಸ್ ನಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಅಶೋಕ್ ಪೂಜಾರಿ ಮತ್ತು ಅರವಿಂದ ದಳವಾ ಜೆಡಿಎಸ್ಪರ ಪ್ರಚಾರದಲ್ಲಿ ತೊಡಗಿದ್ದಾರೆ.
ಸಕ್ಕರೆ ರಾಜಕಾರಣ: ತಾಲೂಕಿನಲ್ಲಿ ಒಟ್ಟು ೧೧ ಜಿ.ಪಂ ಸ್ಥಾನಗಳಿದ್ದು ಅದರಲ್ಲಿ ೬ ಸ್ಥಾನಗಳು ಅರಭಾವಿ ಕ್ಷೇತ್ರದಲ್ಲಿ ಬರುತ್ತವೆ ಇನ್ನು ಒಟ್ಟು ೪೧ ತಾಲೂಕು ಪಂಚಾ ಸ್ಥಾನಗಳಲ್ಲಿ ಅರಭಾವಿಗೆ ೨೨ ಸ್ಥಾನಗಳು ಬರುತ್ತವೆ.ಶತಾಯಗತವಾಗಿ ಬಾಲಚಂದ್ರರ ಬೆಂಬಲಿಗರನ್ನು ಸೋಲಿಸಲೇಬೇಕು ಎಂದು ಪಣ ತೊಟ್ಟಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅರಭಾವಿಯಿಂದಲೇ ಪ್ರಚಾರ ಪ್ರಾರಂಭಿಸಿದ್ದು ವಿಶೇಷವಾಗಿದೆ. ತಾಲೂಕಿನ ಘಟಪ್ರಭಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸ್ಥಾನದಿಂದಿ ಇಳಿದಿರುವ ಬಾಲಚಂದ್ರರ ಜಾಗಕ್ಕೀಗ ಇವರ ಸಹೋದರ ಲಖನ್ ಜಾರಕಿಹೊಳಿ ಅಧ್ಯಕ್ಷರಾಗಿದ್ದಾರೆ. ಇನ್ನು ತೀರಾ ಇತ್ತೀಚೆಗೆ ಈ ಸಕ್ಕರೆ ಕಾರ್ಖಾನೆ ಯ ಕೆಲ ಆಡಳಿತ ಮಂಡಳಿಯವರ್ನು ಸಿಬಿಐ ನವರು ಬಂಧಿಸಿದ್ದಾರೆ. ಸಚಿವರಾಗಿದ್ದಾಗ ಸರ್ಕಾರದಿಂದ ಕಾರ್ಖಾನೆ ಪುನಶ್ಚೇತನಕ್ಕಾಗಿ ಸಾಕಷ್ಟು ಅನುದಾನ ಪಡೆದಿದ್ದ ಬಾಲಚಂದ್ರರು ಇದರ ಏಳಿಗೆಗೆ ಶ್ರಮಿಸಿದ್ದು ಅಷ್ಟೇ ಎಂಬ ಆರೋಪವೂ ಇದೆ.ಇವರು ಸತೀಶ್ ಜಾರಕಿಹೊಳಿಯವರ ಜೊತೆ ಇದ್ದು ಬಾಲಚಂದ್ರರಿಗು ಇವರಿಗೂ ಅಷ್ಟಕ್ಕಷ್ಟೆ. ಇತ್ತೀಚೆಗಷ್ಟೇ ಬಾಲಚಂದ್ರ ಈಗಾಗಲೇ ಕ್ಷೇತ್ರಕ್ಕೆ ಬಂದು ಹಲವೆಡೆ ಬಹಿರಂಗ ಪ್ರಚಾರ ಸಭೆಯಲ್ಲಿ ಪರೋಕ್ಷವಾಗಿ ಬಾಲಚಂದ್ರರನ್ನು ತರಾಟೆಗೆ ತೆಗೆದುಕೊಂಡಿರುವ ಯಡಿಯೂರಪ್ಪ ರಾಜಕೀಯ ಸಮರಕ್ಕೆ ನಾಂದಿ ಹಾಡಿದ್ದಾರೆ. ಇನ್ನು ಇವರ ಇನ್ನೊಬ್ಬ ಸಹೋದರ ಸತೀಶ್ ಜಾರಕಿಹೊಳಿಯವರೊಡನೆ ಇವರ ಸಂಬಂಧ ಸರಿಇಲ್ಲದ ಕಾರಣ ಅವರೂ ಸಹ ಬಾಲಚಂದ್ರರಿಗೆ ಕಡಿವಾಣ ಹಾಕಲು "ಂದೇಟು ಹಾಕುವುದಿಲ್ಲ ಎಂದೇ ಹೇಳಲಾಗುತ್ತಿದೆ.
ಒಟ್ಟಾರೆ ಹೇಳುವುದಾದರೆ ಅರಭಾವಿ ಕ್ಷೇತ್ರದ ಜಿಲ್ಲಾ ಹಾಗೂ ತಾಲೂಕು ಪಂಚಾತಿ ಚುನಾವಣೆ ಇಡೀ ರಾಜ್ಯದ ಗಮನ ಸೆಳೆದಿದೆ.ಒಂದೆಡೆ ಬಿಜೆಪಿ ಸರ್ಕಾರಕ್ಕೂ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ಅಷ್ಟೇ ಪ್ರತಿಷ್ಟೆ ಬಾಲಚಂದ್ರರಿಗೂ ಇದೆ.ಇನ್ನು ಮತದಾರ ಯಾವ ನಿಧಾರ ಕೈ ಗೊಳ್ಳುತ್ತಾನೆ ಅಂತಾ ಕಾದು ನೊಡಬೇಕು.
Thursday, January 13, 2011
ಜಾನಪದ ವಿವಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!
* ಮಧ್ಯ ಹಾಗೂ ಉತ್ತರ ಕರ್ನಾಟಕ ಪ್ರವಾಸ ಮುಗಿಸಿದ ಸಮಿತಿ
* ವಿವಿ ಸ್ಥಾಪಿಸಲು ದುಂಬಾಲು ಬಿದ್ದ ಬೆಳಗಾವಿ, ಹಾವೇರಿ ಹಾಗೂ ಬಿಜಾಪುರ
* ಬಜೆಟ್ನಲ್ಲಿ ೧೦೦ ಕೋಟಿ ತೆಗೆದಿರಿಸಲು ಅಕಾಡೆಮಿಯಿಂದ ಸರ್ಕಾರಕ್ಕೆ ಮನವಿ
ಕನ್ನಡ ನಾಡು ಸಂಸ್ಕತಿಯ ಬೀಡು.ಗಂದಧ ನಾಡು. ಇಲ್ಲಿನ ಕಣ ಕಣದಲ್ಲೂ ಸಂಸ್ಕತಿ, ಸಂUತ ಹಾಗೂ ಸಂಪ್ರದಾಯದ ಸೊಗಡು ಕಾಣಸಿಗುತ್ತದೆ. ಅದರಲ್ಲೂ "ಶೇಷವಾಗಿ ಇಲ್ಲಿನ ಜಾನಪದ ಕಲೆ ತನ್ನದೇ ಆದ ವೈಶಿಷ್ಟತೆ ಹೊಂದಿದೆ. ನಾಡಿನ ಪ್ರತಿಯೊಂದು ಜಿಲ್ಲೆಗಳು ಒಂದಿಲ್ಲಾ ಒಂದು ಜಾನಪದಸಂಪತ್ತನ್ನು ಒಳಗೊಂಡಿದೆ. ಈ "ನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾನಪದ "ಶ್ವ "ದ್ಯಾಲಯ ಸ್ಥಾಪನೆಗೆ ಮುಂದಾಗಿದೆ. ಆದರೆ ಈಗ ಎದುರಾಗಿರುವ ಪ್ರಶ್ನೆ ಎಂದರೆ ಈ "ಶ್ವ"ದ್ಯಾಲಯವನ್ನು ಎಲ್ಲಿ ಸ್ಥಾಪಿಸುವುದು ಅಂತ.
ಹೆಚ್ಚಿದ ಬೇಡಿಕೆ: ರಾಜ್ಯ ಸರ್ಕಾರ ಜಾನಪದ "ಶ್ವ"ದ್ಯಾಲಯ ಸ್ಥಾಪನೆಗೆ ಮುಂದಾಗಿದ್ದೇ ತಡ ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳಿಂದ ನಮ್ಮ ಜಿಲ್ಲೆಯಲ್ಲಿ ಸ್ಥಾಪನೆಯಾಗಲಿ ಎಂಬ ಬೇಡಿಕೆಯ ಕೂಗು ಕೇಳಿ ಬಂದಿತು. ಗಡಿ ಜಿಲ್ಲೆ ಬೆಳಗಾ" ಸೇರಿದಂತೆ ಬಿಜಾಪುರ ಹಾಗೂ ಇತರೆಡೆ ಸ್ಥಾಪನೆಯಾಗಲಿ ಎಂಬ ಬೇಡಿಕೆ ವ್ಯಕ್ತವಾಗಿದೆ. ಕನ್ನಡ ಮತ್ತು ಸಂಸ್ಕತಿ ಸಚಿವ ಗೋ"ಂದ್ ಕಾರಜೋಳರ ತವರು ಜಿಲ್ಲೆಯಾದ ಬಾಗಲಕೋಟೆ ಹಾಗೂ ಬಿಜಾಪುರದಲ್ಲಿ ಸ್ಥಾಪಿಸಲಾಗುತ್ತದೆ ಎಂಬ ಮಾತುಗಳು ಆರಂಭದಲ್ಲಿ ಕೇಳಿ ಬಂದಿತ್ತು. ಇನ್ನು ಕೆಲವು ಮೂಲಗಳ ಪ್ರಕಾರ ಜಾನಪದ "ಶ್ವ"ದ್ಯಾಲಯ ಸ್ಥಾಪನೆಯಾಗಲಿರುವುದು ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನಲ್ಲಿ. ಹೌದು ಸಾಂಸ್ಕತಿಕವಾಗಿ ಸಾಕಷ್ಟು ಸಂಪದ್ಭರಿತವಾಗಿರುವ ಹಾವೇರಿ ಜಿಲ್ಲೆ ರಾಜ್ಯದ ಕೇಂದ್ರ ಪ್ರದೇಶದಲ್ಲಿದೆ. ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕಕ್ಕೆ ಕೊಂಡಿಯಂತಿರುವ ಈ ಜಿಲ್ಲೆಯಲ್ಲಿ "" ಸ್ಥಾಪನೆಯಾಗುವ ಸಾಧ್ಯತೆಇದೆ ಎನ್ನಲಾಗುತ್ತಿದೆ.
ಸ"ತಿ ರಚನೆ: ಜಾನಪದ "ಶ್ವ"ದ್ಯಾಲಯ ಸ್ಥಾಪನೆಗೆಂದು ೬ ಜನ ಸದಸ್ಯರನ್ನು ಒಳಗೊಂಡ ಸ"ತಿ ರಚಿಸಲಾಗಿದೆ. "ರಿಯ ಜಾನಪದ "ದ್ವಾಂಸ ಅಂಬಳಿಕೆ "ರಿಯಣ್ಣ, "ರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ, ಜಾನಪದ ಅಕಾಡೆ" ಅಧ್ಯಕ್ಷ .ಗೋರು. ಚನ್ನಬಸಪ್ಪ, ಸಿ."ರಣ್ಣ, ಬಸವರಾಜ ಮಲಶೆಟ್ಟಿ, ಡಾ. ರಾಮೂ ಮೂಲಗಿ ಈ ಸ"ತಿ ಸದಸ್ಯರಾಗಿದ್ದಾರೆ. ಈಗಾಗಲೇ ಮಧ್ಯ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳ ಪ್ರವಾಸ ಮುಗಿಸಿರುವ ಸ"ತಿ ಇಷ್ಟರಲ್ಲೇ ತನ್ನ ವರದಿ ಸಲ್ಲಿಸಲಿದೆ.
ಮಾನದಂಡ: ಉದ್ದೇಶಿತ "ಶ್ವ"ದ್ಯಾಲಯ "ಶೇಷಾಧಿಕಾರಿಯಾಗಿ ನೇಮಕಗೊಂಡಿರುವ ಅಂಬಳಿಕೆ "ರಿಯಣ್ಣರ ಪ್ರಕಾರ "" ಸ್ಥಾಪನೆಗೆ ಮೂಲಭೂತ ಸೌಲಭ್ಯಗಳುಳ್ಳ, ಸಮರ್ಪಕ ಸಂಪರ್ಕ ವ್ಯವಸ್ಥೆ ಹೊಂದಿರುವ ಸ್ಥಳ ಸೂಕ್ತ. ಅದರಲ್ಲೂ "ಶೇಷವಾಗಿ ಹೆದ್ದಾರಿಗೆ ಹೊಂದಿಕೊಂಡಿದ್ದರೆ ಇನ್ನೂ ಹೆಚ್ಚು ಅನುಕೂಲಕರ. ಅಧ್ಯಯನಕ್ಕಾಗಿ ಬರು ಹೋಗುವವರಿಗೆ ಹಾಗೂ ಉಳಿದೆಲ್ಲ ದೃಂದ ಬಸ್ ಹಾಗೂ ರೈಲು ಎರಡೂ ಸೌಲಭ್ಯ ಹೊಂದಿರುವ ಸ್ಥಳ ಉತ್ತಮ ಆಯ್ಕೆಯಾಗಲಿದೆ.
ಪ್ರತಿಕ್ರಿಯೆ:
ಡಾ. ದೊಡ್ಡರಂಗೇಗೌಡ
ಸದಸ್ಯರು ವಿಧಾನಪರಿಷತ್ ಹಾಗೂ ಕವಿಗಳು
ಅಪಾರ ಜಾನಪದ ಸಂಪತ್ತನ್ನು ತನ್ನ ಮಡಿಲಲ್ಲಿ ತುಂಬಿಕೊಂಡಿರುವ ರಾಜ್ಯದಲ್ಲಿ ಸರ್ಕಾರ ಜಾನಪದ "" ಸ್ಥಾಪನೆಗೆ ಮುಂದಾಗಿರುವುದು ಸಂತಸದ "ಷಯ. ಹೆಸರೇ ಹೇಳುವಂತೆ ಜಾನಪದ ಅಂದರೆ ದೇಸಿ .ದೇಸಿ ಅಂದರೆ ಗ್ರಾ"ಣ ಸೊಗಡು ಹಾಗೂ ಪರಿಸರ ಹೊಂದಿರುವ ರಾಜ್ಯದ ಯಾವುದೇ ಪ್ರದೇಶದಲ್ಲಿ "" ಸ್ಥಾಪನೆಯಾದರೂ ಸ್ವಾಗತಾರ್ಹ. ಆಧುನಿಕತೆಯ ಸೋಂಕು ಇರದ "ಂದುಳಿದ ಪ್ರದೇಶದಲ್ಲಿ ಈ "" ಸ್ಥಾಪನೆ ಆದದ್ದೇ ಆದರೆ ಆ ಮೂಲಕ ಆ ಪ್ರದೇಶದ ಅಭಿವೃದ್ಧಿಗೆ ನಾಂದಿ ಹಾಡಿದಂತಾಗುತ್ತದೆ. ಜಾನಪದ ಸಿರಿಯನ್ನು ನಗರ ಪ್ರದೇಶದಲ್ಲಿ ಕುಳಿತುಕೊಂಡು ಅನಾವರಣ ಮಾಡಲು ಸಾಧ್ಯ"ಲ್ಲ.
ವರದಿ ಸಲ್ಲಿಸುವ ಹಂತದಲ್ಲಿ
ಈಗಾಗಲೇ ಮಧ್ಯ ಕರ್ನಾಟಕದ ಶಿವಮೊಗ್ಗ,ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಲ್ಲೆಗಳಿಗೆ ಭೇಟಿ ನೀಡಿರುವ ಸ"ತಿ ಇಷ್ಟರಲ್ಲೇ ತನ್ನ ವರದಿ ಸಲ್ಲಿಸಲಿದೆ. ಇನ್ನು ಎರಡನೇ ಹಂತದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಗಳಿಗೆ ಭೇಟಿ ನೀಡುವ ಉದ್ದೇಶ"ದ್ದು ಅಲ್ಲಿ ಪ್ರಾದೇಶಿಕ ಕೇಂದ್ರಗಳನ್ನುತೆರೆಯುವ ಆಲೋಚನೆದೆ. ಇದಕ್ಕಾಗಿ ೫೦ ಎಕರೆ ಜ"ನಿನ ಅವಶ್ಯಕತೆ ಇದೆ. ಜಾನಪದ ತಜ್ಞರ ಸಮಾಲೋಚನಾ ಸಭೆಯ ನಿರ್ಣಯದಂತೆ ಈ ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡಿದ್ದು ಕಂದಾಯ ಭೂ" ಅಗತ್ಯತೆ ಇದೆ. ಸ್ಥಳ ನಿಗದಿಯಾದಲ್ಲಿ ಜಿಲ್ಲಾಡಳಿತದಿಂದ ದಾಖಲೆ ಪಡೆದು ಮುಂದಿನ ಕ್ಜಮ ಕೈಗೊಳ್ಳಲಾಗುವುದು.
ಅಂಬಳಿಕೆ ಹಿರಿಯಣ್ಣ
ಜಾನಪದ ಸಂಶೋಧಕ ಹಾಗೂ ನಿಯೋಜಿತ ವಿಶೇಷಾಧಿಕಾರಿ
ಕೃಷ್ಣಾ ತೀರ್ಪು:ಸಂತ್ರಸ್ತರ ಬೆಂಬಿಡದ ಸ್ಥಳಾಂತರ ಭೂತ
* ಮತ್ತಷ್ಟು ಫಲವತ್ತಾದ ಜಮೀನು, ಪ್ರದೇಶ ಮುಳುಗಡೆ
* ಪುನರ್ವಸತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರದ ಶಂಕೆ
ಇಂತು ಬಾಗಲಕೋಟೆ ನಗರದ ಜನರು ನೆಮ್ಮದಿ ಬಹುಶ: ಆ ದೇವರಿಗೂ ಒಪ್ಪಿಗೆ ಇಲ್ಲ ಅನಿಸುತ್ತೆ. ಕಾರಣ ಇಷ್ಟೇ ಮೊದಲೇ ಆಲಮಟ್ಟಿ ಹನ್ನೀರಿನ್ಲಿ ಮುಳುಗಿ ಮೂರು ತುಂಡುಗಳಾಗಿದ್ದ ನಗರದ ಜನತೆಗೆ ಮತ್ತೀಗ ಸ್ಥಳಾಂತರದ ಪೆಡಂಭೂತ ಬೆನ್ನುಹತ್ತಿದೆ. ೨ ನೇ ಅತಿ ದೊಡ್ಡ ಸಂತ್ರಸ್ತ ಖ್ಯಾತಿಯ ನಗರದ ಇನ್ನು ಹೆಚ್ಚಿನ ಪ್ರದೇಶ ಈಗ ಆಣೆಕಟ್ಟು ಎತ್ತರ ಹೆಚ್ಚಿಸುವುದರಿಂದ ಮುಳುಗಡೆಯಾಗಲಿದೆ. ಒಲ್ಲದ ಮನಸ್ಸಿನಂದಾದರೂ ಸರಿ ಜನರೀಗ ಸಜ್ಜಾಗಬೇಕಾದ ಅನಿವಾರ್ಯತೆಇದೆ.
ಶತಮಾನದ ಬೆಸುಗೆ: ಮುಳುಗಡೆ ನಂತರ ಬಾಗಲಕೋಟೆ ಹಳೆನಗರ, ನವನಗರ ಹಾಗೂ "ದ್ಯಾಗಿರಿ ಅಂತಾ ಮೂರು ಭಾಗಗಳಲ್ಲಿ ಹಂಚಿ ಹೋಗಿದೆ. ಈ ಪ್ರದೇಶದಲ್ಲಿ ವಾಸಿಸುತ್ತಿರುವ "ನ್ನೀರು ಸಂತ್ರಸ್ತರು ಸ್ಥಳಾಂತರದ ಅವಾಂತರದಿಂದ ಸುಧಾರಿಸಿಕೊಳ್ಳುವ ಮುನ್ನವೇ ಸಿಡಿಲಿನಂತೆ ಬಂದೆರಗಿದ ಈ ತೀರ್ಪು ಮತ್ತೆ ನಿದ್ದೆಗೆಡಿಸಿದೆ. ಈ "ಂದೆ ಅಂದರೆ ೫೧೯.೬ "ಟರ್ ಎತ್ತರ"ದ್ದಾಗ ಸರಿಸುಮಾರು ೧೦ ಸಾ"ರಕ್ಕು ಹೆಚ್ಚು ಕುಟುಂಬಗಳು ಅತಂತ್ರವಾಗಿದ್ದವು.೧೪೭ ಗ್ರಾಮಗಳು ಹಾಗೂ ೧.೫೫ ಲಕ್ಷ ಎಕರೆ ಜ"ನು ಮುಳುಗಡೆಯಾಗಿದ್ದು ಈಗ ಮತ್ತೆ ಅಣೆಕಟ್ಟು ಎತ್ತರ ಹೆಚ್ಚಿಸುವುದರಿಂದ ೨೨ ಗ್ರಾಮಗಳು ಹಾಗೂ ೪೮ ಸಾ"ರ ಹೆಕ್ಟೇರ್ ಫಲವತ್ತಾದ ಭೂ" ಕೃಷ್ಣಾರ್ಪಣವಾಗಲಿದೆ. ಈ ಪ್ರದೇಶದ ಜನರ ಇನ್ನೊಂದು ಸಮಸ್ಯೆ ಎಂದರೆ ಈ ಪ್ರದೇಶದ ಜೊತೆಗೆ ಇವರಿಗಿರುವ ಭಾವನಾತ್ಮಕ ಬೆಸುಗೆ. ಹೌದು ಶತಮಾನದಿಂದ ಇಲ್ಲಯೇ ಹುಟ್ಟಿ ಬೆಳೆದು ಬಂದಿರುವ ಇವರಿಗೆ ಸ್ಥಳಾಂತರ ಅಂದರೆ ಅದೆಕೋ ಅಲರ್ಜಿ. ೧೯೬೨ ರಿಂದಲೂ ಸ್ಥಳಾಂತರವನ್ನು "ರೋಧಿಸುತ್ತಾ ಬಂದಿದ್ದ ಜನರು ೧೯೮೩ ರಲ್ಲಿ ಸಂಪೂರ್ಣ ಸ್ಥಳಾಂತರಕ್ಕೆ ಒಪ್ಪಿಕೊಂಡರು.ತಾ"ರುವ ಮನೆಯೊಂದಿಗಿನ ನಂಟನ್ನು ತ್ಯಾಗ ಮಾಡಲು ಸಿದ್ಧರಾದ ಜನರು ಈಗ ಮತ್ತಷ್ಟು ಮುಳುಗಡೆಯಾದಲ್ಲಿ ಮತ್ತೆ ತ್ಯಾಗ ಮಾಡಲೇಬೇಕು. ಒಂದರ್ಥದಲ್ಲಿ ಸಂತ್ರಸ್ತರು ತ್ಯಾಗರಾಜರು ಅಂತಲೇ ಅನ್ನಬಹುದು.ಈ ನಿಟ್ಟಿನಲ್ಲಿ ಇವರೀಗಾಗಲೇ ಮಾನಸಿಕ ಸಿದ್ಥತೆ ಮಾಡಿಕೊಳ್ಳುತ್ತಿದ್ದಾರೆ.
ಮುಳುಗಡೆಯಾಗುವ ಪ್ರದೇಶಗಳು:ಬಾಗಲಕೋಟೆ, ಹುನಗುಂದ ಹಾಗೂ ಬೀಳಗಿ ತಾಲೂಕಿನ ಇನ್ನು ಶೇ ೪೦ ರಷ್ಟು ಪ್ರದೇಶಗಳು ಬಾಧಿತಗೊಳ್ಳಲಿವೆ.ಬಿಜಾಪು ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಬಹುತೇಕ ಗ್ರಾಮಗಳು ಮುಳುಗಡೆಯಾಗಲಿವೆ.ಮೊದಲೇ ಕಳೆದ ವರ್ಷದ ನೆರೆಮದ ತತ್ತರಿಸಿದ್ದ ರೈತರೀಗ ಮುಳುಗಡೆಂದಾಗಿ ಇದ್ದ ಭೂ"ಯನ್ನು ಕಳೆದುಕೊಳ್ಳಬೇಕಾಗಿದೆ.ಇದಕ್ಕೆ ಪ್ರತಿಯಾಗಿ ಸರ್ಕಾರ ಸಾ"ರಾರು ಕೋಟಿ ರು ಪರಿಹಾರ ನೀಡಬೇಕು.ಆದರೆ ಒಂದು ಸಮಾಧಾನಕರ ಸಂಗತಿ ಎಂದರೆ ಆಣೆಕಟ್ಟು ಎತ್ತರ ಹೆಚ್ಚಿಸಿ ನೀರು ಸಂಗ್ರ"ಸುವುದರಿಂದ ಹೈದರಾಬಾದ್ ಕರ್ನಾಟಕ ಪ್ರದೇಶದ ಗುಕಬರ್ಗ, ರಾಯಚೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳ ೧೨ ಲಕ್ಷ ಹೆಕ್ಟೇರ್ಕ್ಕೂ ಹೆಚ್ಚಿನ ಜ"ನಿಗೆ ನೀರಾವರಿ ಸೌಲಭ್ಯ ಒದಗಲಿದೆ.ಇದರ ಅಂದಾಜು ವೆಚ್ಚ ೧೫ ಸಾ"ರ ಕೋಟಿ.
ಬಿಜಾಪುರ ಜಿಲ್ಲೆಯ ಮುಳವಾಡ ಏತ ನೀರಾವರಿ ಯೋಜನೆ, ಚಿಮ್ಮಲಗಿ ಏತ ನೀರಾವರಿ ಯೋಜನೆ, ಗುತ್ತಿ ಬಸವಣ್ಣ ಸೇರಿದಂತೆ ಹಲವು ನೀರಾವರಿ ಯೋಜನೆಗಳು ಹಾಗೂ ಕಾಳುವೆ ಉಪಕಾಲುವೆ ಯೋಜನೆಗಳು ಶರವೇಗದಲ್ಲಿ ಅನುಷ್ಠಾನಗೊಳ್ಳಲಿವೆ. ಇದಕ್ಕೆ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕಷ್ಟೆ.
ಭ್ರಷ್ಟಾಚಾರದ ಭೀತಿ: ಇನ್ನು ಸಂತ್ರಸ್ತರ ಪುನರ್ವಸತಿ "ಷಯ ಬಂದಾಗ ಮೊದಲು ಕೇಳಿ ಬರುವ ಆರೀಪ ಎಂದರೆ ಭ್ರಷ್ಟಾಚಾರದ್ದು.ಹೌದು ಹರಿಹಾರ ಹಂಚಿಕೆಯಾಗಲಿ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸುವಾಗ ನಡೆಯಬಹುದಾದ ಎನ್ನಲಾದ ಭ್ರಷ್ಟಾಚಾರದ ಭಿತಿ ಸಂತ್ರಸ್ತರದ್ದಾಗಿದೆ.ಇದಕ್ಕೆ ಆಸ್ಪದ ಕೊಡದಂತೆ ಸಮರ್ಪಕ ಪುನರ್ವಸತಿ ಕಲ್ಪಿಸಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ.
ಕೃಷ್ಣಾ ನ್ಯಾಯಾಧೀಕರಣ ಐ ತೀರ್ಪಿನ ಅನ್ವಯ ಎತ್ತರ ಹೆಚ್ಚಿಸಲು ಮುಂದಾಗುವ ಮೊದಲು ಮುಳುಗಡೆಯ ಪರಿಹಾರ ಕಾರ್ಯ ಸಮರ್ಪಕವಾಗಿ ಆಗಬೇಕು. ಅದು ಆಗದೆ ಕ್ರಸ್ಟೆಗೇಟ್ ಅಳವಡಿಡಿಸ ಜಲಾಶಯದ ನೀರಿನ ಮಟ್ಟ ಹೆಚ್ಚಿಸಿದರೆ ಮೆಚ್ಚನಾ ಪರಮಾತ್ಮನು.ಇದು ಮುಳುಗಡೆ ಸಂತ್ರಸ್ತರ ಆಶಯವೂ ಕೂಡ.
ಅಕ್ರಮ ಮರಳುಗಾರಿಕೆಗೆ ಬರಿದಾಗುತ್ತಿರುವ ತುಂಗೆಯ ಒಡಲು
* "ಮಿತಿಮೀರಿದ ಮರಳುಲೂಟಿಕೋರರ ಅಟ್ಟಹಾಸ
* ಅಧಿಕಾರಿಗಳ ಅಸಹಾಯಕತೆ
{ಮಧ್ಯ ಕರ್ನಾಟಕಕ್ಕೆ ಹೊಂದಿಕೊಂಡು ಬರುವ ಹಾವೇರಿ ಜಿಲ್ಲೆಯಲ್ಲಿ ಮರಳು ಲೂಟಿಕೋರರ ಅಟ್ಟಹಾಸ ಮಿತಿಮೀರಿದೆ. ಪರಿಣಾಮ ತುಂಗೆಯ ಒಡಲು ಬರಿದಾಗುವ ಕಾಲ ಸನ್ನಿಹಿತವಾಗಿದೆ. ಇದಕ್ಕೆ ಕಡಿವಾಣಹಾಕಲು ಯತ್ನಿಸಿದ ಅಧಿಕಾರಿಗಳ ಮೇಲೆ ಹಲ್ಲೆಯೂ ನಡೆದಿದ್ದು ಅಧಿಕಾರಿಗಳು ಭಯಬೀಳುವಂತಾಗಿದೆ. ಮುಂಬರುವ ವರ್ಷ ತುಂಗಾ ಮೇಲ್ದಂಡೆ ಯೋಜನೆ ಎರಡನೇ ಹಂತ ಪೂರ್ಣಗೊಂಡು ನೀರಾವರಿ ಕನಸು ಕಾಣುತ್ತಿರುವ ರೈತರೀಗ ಅಕ್ರಮ ಮರಳುಗಾರಿಕೆ ಶಾಪವಾಗಿ ಪರಿಣಮಿಸಿದೆ.ಬರೀ ಅಕ್ರಮ ಗಣಿಗಾರಿಕೆ ಬಗ್ಗೆ ಮಾತನಾಡುತ್ತಿರುವ ವಿಪಕ್ಷಗಳು ಅಕ್ರಮ ಮರಳುಗಾರಿಕೆ ಬಗ್ಗೆ ಚಕಾರ ಶಬ್ದ ಎತ್ತದಿರುವುದು ವಿಪರ್ಯಾಸದ ಸಂಗತಿಯಾಗಿದೆ. }
ನಮ್ಮ ರಾಜ್ಯವನ್ನು ಸದ್ದಿಲ್ಲದೇ ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದು ಅಕ್ರಮ ಗಣಿಗಾರಿಕೆ ಇನ್ನೊಂದು ಅಕ್ರಮ ಮರಳು ದಂಧೆ. ಈ ಎರಡೂ ಅಕ್ರಮ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು ಒಂದು ಅರಣ್ಯ ಸಂಪತ್ತನ್ನು ದೋಚಿದರೆ ಇನ್ನೊಂದು ಅಂತರ್ಜಲ ಕುಸಿತ ಹಾಗೂ ನದಿಗಳು ಬತ್ತಲು ಕಾರಣವಾಗುತ್ತಿದೆ. ನಮ್ಮ ನಾಡಿನೆಲ್ಲೆಡೆ ನದಿಗಳು ಇರುವ ಕಡೆ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ಸಾಗುತ್ತಿದೆ. ಪರಿಣಾಮ ಇದಕ್ಕೆ ಹಾಲೆರೆದು ಪೋಸುತ್ತಿರುವ ಪ್ರಭಾ"ವ್ಯಕ್ತಿಗಳ ಧನದಾಹದ ಕಬಂಧ ಬಾಹುವಿಗೆ ಸಿಕ್ಕು ಸಮಾಜ ನಲಗುವಂತಾಗಿದೆ. ಇದಕ್ಕೆ ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯೂ ಹೊರತಾಗಿಲ್ಲ.
ನಿತ್ಯ ಲೂಟಿ: ಮಧ್ಯ ಕರ್ನಾಟಕಕ್ಕೆ ಹೊಂದಿಕೊಂಡು ಬರುವ ಈ "ಹಿಂದೆ ಧಾರವಾಡ ಜಿಲ್ಲೆಯಲ್ಲಿದ್ದ ಹಾವೇರಿ ಜೆ.ಎಚ್. ಪಟೇಲರ ಅವಧಿಯಲ್ಲಿ ಹೊಸ ಜಿಲ್ಲೆ ರಚನೆಯಾದಾಗ ಜನ್ಮ ತಾಳಿತು. ಜಿಲ್ಲೆಯಲ್ಲಿ ತುಂಗಭದ್ರಾ, ವರದಾ, ಕುಮದ್ವತಿ ಹಾಗೂ ಧಮಾ ಸೇರಿದಂತೆ ೪ ಪ್ರಮುಖ ನದಿಗಳು ಹರಿಯುತ್ತವೆ. ರಾಣೆಬೆನ್ನೂರು, ಹಿರೇಕೆರೂರು ಹಾಗೂ ಹಾವೇರಿ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಇದಕ್ಕೆ ಪ್ರಭಾವಿ ವ್ಯಕ್ತಿಗಳ ಕೃಪಾಕಟಾಕ್ಷವಿದೆ. ತುಂಗಭದ್ರಾ ನದಿತೀರದುದ್ದಕ್ಕೂ ನಡೆಯುತ್ತಿರುವ ಕಡಿವಾಣ ಹಾಕಲು ಈ ವರೆಗೆ ಸಾಧ್ಯವಾಗಿಲ್ಲ. ಮುಂಚೆಂದಲೂ ಕಡಿವಾಣ ಹಾಕುವ ಪ್ರಯತ್ನ ನಡೆದೇ ಇಲ್ಲ ಎನ್ನಬಹುದು. ಪರಿಣಾಮ ಮರಳು ಲೂಟಿಕೋರರ ಅಟ್ಟಹಾಸ ಮುಂದುವರೆದಿದೆ. ವಾಸ್ತವವಾಗಿ ಮರಳುಗಾರಿಕೆಗೆಂದು ಪಡೆದ ಪ್ರದೇಶಕ್ಕಿಂತ ಹೆಚ್ಚು ಕಡೆ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ. ಕೆಲ ಹಂತದಲ್ಲಿ ಅಧಿಕಾರಿಗಳೂ ಅಸಹಾಯಕರಾಗಿದ್ದಾರೆ. ಅನುಮತಿ ಪಡೆದ ಪ್ರದೇಶದ ನಾಲ್ಕು ಪಟ್ಟು ಪ್ರದೇಶದಲ್ಲಿ ಈ ಕಳ್ಳ ದಂಧೆ ನಡೆಯುತ್ತಿದ್ದು, ಗೃಹ ನಿರ್ಮಾಣ ಸೇರಿದಂತೆ ಇತರೆ ಬಳಕೆಗೆ ಏನಿಲ್ಲವೆಂದರೂ ದಿನಕ್ಕೆ ೫೦೦ ರಿಂದ ೬೦೦ ಲಾರಿ ಮರಳು ಸಾಗಿಸಲಾಗುತ್ತದೆ.ಅಕ್ರಮವಾಗಿ ಸಾಗಿಸುವ ಫಿಲ್ಟರ್ ಮರಳಿನಿಂದ ತಯಾರಾಗುವ ಕಟ್ಟಡಗಳ ಗುಣಮಟ್ಟವೂ ಕಳಪೆಯಾಗುವ ಕಾರಣ ಕಟ್ಟಡ ಕುಸಿತಕ್ಕೂ ಕಾರಣ ಇನ್ನೊಂದೆಡೆ ನದಿಯಲ್ಲಿನ ನೀರು ಬತ್ತುವುದು. ಇವೆರಡೂ ಅಕ್ರಮ ಮರಳುಗಾರಿಕೆಂದಾಗುವ ಹಾನಿಯಾಗಿವೆ.
"ವಿರೋಧಿಸಿದಲ್ಲಿ ಅಪಾಯ: ಈ ಹಿಂದೆ ಅಂದರೆ ೨೦೦೨ರಲ್ಲಿ ಗಣಿ ಮತ್ತು ಭೂ"ಜ್ಞಾನ ಇಲಾಖೆಯವರು ಹರಾಜಿನ ಮೂಲಕ ಮರಳುಗಾರಿಕೆಗೆ ಗುತ್ತಿಗೆ ನೀಡಲು ನಿರ್ಧರಿಸಿತ್ತು. ಈ ನಿರ್ಧಾರಕ್ಕೆ ಹೈ ಕೋರ್ಟ್ ತಡೆಯಾಜ್ಞೆ ನೀಡಿತು. ತನ್ನ ನಿರ್ಧಾರದಂತೆ ಹರಾಜು ಪ್ರಕಿಯೆ ಮೂಲಕ ಮರಳುಗಾರಿಕೆಗೆ ಅವಕಾಶ ಮಾಡಿಕೊಡಬೇಕೆನ್ನುವ ಹೊತ್ತಿಗೆ ಸುಮಾರು ೭-೮ ವರ್ಷಗಳುರುಳಿದವು. ಈ ಅವಧಿಯಲ್ಲಿ ಹೇಳೋರು ಕೇಳೋರು ಇಲ್ಲದಂತಾಗಿ ಚಿಗುರುಕೊಂಡ ಅಕ್ರಮ ಮರಳುಗಾರಿಕೆ ಇಂದು ಇಷ್ಟೊಂದು "ರಾಟರೂಪ ಪಡೆಯಲು ಕಾರಣವಾತು. ಪ್ರಸ್ತುತ ಜಿಲ್ಲೆಯಲ್ಲಿ ೨೫೦ ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಮರಳುಗಾರಿಕೆಗೆ ಅಧಿಕೃತವಾಗಿ ಗಣಿ ಮತ್ತು ಭೂ "ಜ್ಞಾನ ಇಲಾಖೆ ಅನುಮತಿ ನೀಡಿದೆ. ಇದು ಇಲಾಖೆ ನೀಡುವ ಅಂಕಿ ಅಂಶವಾದರೂ ವಾಸ್ತವವೇ ಬೇರೆ. ಏನಿಲ್ಲವೆಂದರೂ ಸರಿ ಸುಮಾರು ೧೦೦೦ ಎಕರೆವರೆಗೆ ಅಕ್ರಮವಾಗಿ ಮರಳುಗಾರಿಕೆ ನಿರಾತಂಕವಾಗಿ ಸಾಗುತ್ತಿದೆ. ಇದನ್ನು ತಡೆಯಲು ಅಥವಾ ವಿರೋಧಿಸಲು ಯತ್ನಿಸಿದ ಪರಿಣಾಮ ಹಲ್ಲೆ. ಇದಕ್ಕೆ ಇತ್ತೀಚೆಗೆ ರಾಣೆಬೆನ್ನೂರು ತಾಲೂಕಿನ ಬೇಲೂರು ಗ್ರಾಮದಲ್ಲಿ ತಹಸೀಲ್ದಾರ್ ಮೇಲೆ ನಡೆದ ಹಲ್ಲೆ ಪ್ರಕರಣವೇ ಉತ್ತಮ ನಿದರ್ಶನ.
ಏನಿದು ಪ್ರಕರಣ: ಬೇಲೂರಿನ ನದಿ ಪಾತ್ರದಲ್ಲಿ ನಡೆಯುತ್ತಿದ್ದ ಆಕ್ರಮ ಮರಳುಗಾರಿಕೆ ಖಚಿತ ಮಾಹಿತಿ ಪಡೆದ ರಾಣೆಬೆನ್ನೂರು ತಹಸೀಲ್ದಾರ್ ಸ್ಥಳಕ್ಕೆ ಧಾವಿಸಿ ಮರಳುಗಾರಿಕೆಗೆ ಬಳಸುತ್ತಿದ್ದ ಬೋಟುಗಳನ್ನು ವಶಪಡಿಸಿಕೊಳ್ಳಲು ಮುಂದಾದರು. ಇದರಿಂದ ಕುಪಿತಗೊಂಡ ಬೋಟ್ ಮಾಲಿಕ ಯಾರೆಂಬುದನ್ನು ಲೆಕ್ಕಿಸದೇ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ. ಅಲ್ಲದೇ ಆತ್ಮಾಹುತಿಗೆ ಯತ್ನಿಸಿದ. ಇತನನ್ನು ಸಮಾಧಾನಪಡಿಸಲೆತ್ನಿಸಿದ ತಹಸೀಲ್ದಾರ್ ಮೇಲೆ ಹಲ್ಲೆ ನಡೆತು. ಯಾವುದೇ ಭಯ"ಲ್ಲದೇ ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗುತ್ತಾರೆಂದರೆ ಇವರ ಬೆನ್ನಿಗೆ ನಿಂತು ರಕ್ಷಿಸುವವರು ಪ್ರಭಾ" ವ್ಯಕಿಯೇ ಆನ್ನುವುದನ್ನು ಬೇರೆ ಹೇಳಬೇಕಿಲ್ಲ. ಹಲ್ಲೆಗೈದವರ "ರುದ್ಧ ಪ್ರಕರಣ ದಾಖಲಾಗಿದೆಯಾದರೂ ಅಧಿಕಾರಿಗಳು ಭಯಬೀಳುವಂತಾಗಿದೆ.
ಹಾಗೆ ನೋಡಿದಲ್ಲಿ ಅಕ್ರಮ ಮರಳುಗಾರಿಕೆ ತಡೆ ನಿಟ್ಟಿನಲ್ಲಿ ಈ ಹಿಂದೆ ಲೋಕಾಯುಕ್ತರೂ ದಾಳಿ ನಡೆಸಿದ್ದರು. ಆವಾಗಲೂ ಲೋಕಾಯುಕ್ತರಿಗೆ ದೂರು ನೀಡಿದವರ ಮೇಲೆ ಹಲ್ಲೆಯಾದದ್ದನ್ನು ಇಲ್ಲಿ ಸ್ಮರಿಸಬಹುದು.
ಇದಿಷ್ಟು ಜಿಲ್ಲೆಯಲ್ಲಿ ನಡೆದು ಬಂದ ಮತ್ತು ಇಂದಿಗೂ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯ ಚಿತ್ರಣ. ಬೇಸಿಗೆಕಾಲ ಬಂತೆಂದರೆ ನೀರಿಗಾಗಿ ಹಪಹಪಿಸುವ ಜಿಲ್ಲೆಯ ಜನತೆಯ ಸಮಸ್ಯೆ ಪರಿಹಾರದ ದೃಂದ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುವ ತುರ್ತು ಆಗತ್ಯವಿದೆ. ಆ ಮೂಲಕ ತುಂಗೆಯ ಒಡಲು ಬರಿದಾಗದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲೆಯ ಜನತೆ ಹಾಗೂ ಜನಪ್ರತಿನಿಧಿಗಳ ಮೇಲಿದೆ. ಹಾಗಾದೀತೆ? ಇನ್ನಾದರೂ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಿಂತಿತೇ ಕಾದು ನೋಡಬೇಕು.
ಹೊಸ ಮರಳು ನೀತಿ: ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಲುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ರಾಜ್ಯ ಸರ್ಕಾರ ಹೊಸ ವರ್ಷದಿಂದ ಹೊಸ ಮರಳು ನೀತಿ ಜಾರಿ ತರಲು ಹೊರಟಿದೆ. ಅಕ್ರಮ ಮರಳು ದಂಧೆ ಮಾಡುವವರ "ರುದ್ಧ ಗೂಂಡಾಕಾಯ್ದೆ ಮಾಡುವ ಹಾಗೂ ಸಾರ್ವಜನಿಕರು ನೇರವಾಗಿ ನಿಗದಿತ ಸ್ಥಳದಿಂದ ಮರಳು ಖರೀದಿಸುವ ಅವಕಾಶ ಕಲ್ಪಿಸಲು ಮುಂದಾಗಿದೆ. ಸಚಿವ ಆರ್.ಅಶೋಕ್ ನೇತೃತ್ವದ ಸಂಪುಟ ಉಪಸ"ತಿ ಈ ನೀತಿ ಅಂತಿಮಗೊಳಿಸುವ ಜವಾಬ್ದಾರಿ ಹೊತ್ತಿದೆ. ತ"ಳುನಾಡು ಮಾದರಿಯಲ್ಲಿ ಹೊಸ ಮರಳು ನೀತಿ ಜಾರಿಗೊಳಿಸಲಾಗುವುದೆಂದು ಸಚಿವ ಅಶೋಕ್ ತಿಳಿಸಿದ್ದಾರೆ.